ಭಾನುವಾರ, ಡಿಸೆಂಬರ್ 2, 2012

ಭೈರವನ ಲಾಕ್ಷಣಿಕ ಸ್ವರೂಪಗಳು




ಭೈರವನ ಅಷ್ಟರೂಪಗಳು

ಈ ಹಿಂದಿನ ಸಂಚಿಕೆಗಳಲ್ಲಿ ಭೈರವನ ಅಷ್ಟರೂಪಗಳ ಬಗ್ಗೆ ಬರೆದಿದ್ದೆ. ಈಗ ಅವುಗಳ ಲಾಕ್ಷಣಿಕ ಸ್ವರೂಪಗಳನ್ನು ವಿವರಿಸುವ ಸಾಹಿತ್ಯ ದೊರಕಿದೆಯಾಗಿ ಅದನ್ನು ಇಲ್ಲಿ ನೀಡಿದ್ದೇನೆ. ಇದೇಕೆ ಮುಖ್ಯವಾಗುತ್ತದೆಯೆಂದರೆ, ಯಾವದೇ ದೇವತೆಯ ಮೂರ್ತಿಗಳನ್ನು ಕಡೆಯುವಾಗ ಶಿಲ್ಪಿಗೆ ಒಂದು ಸರಿಯಾದ ಆಧಾರ ಬೇಕಾಗುತ್ತದೆ. ಅಂಥ ವ್ಯವಸ್ಥೆಯನ್ನು ಪೂರ್ವಿಕರು ಧ್ಯಾನಶ್ಲೋಕವೆಂಬ ಕ್ರಮದಲ್ಲಿ ಒದಗಿಸಿರುತ್ತಾರೆ. ಅವುಗಳನ್ನು ಆಧರಿಸಿ ನಿರ್ಮಿಸಿದ ಮೂರ್ತಿಯು ಸರ್ವಾಂಗ ಸುಂದರವಾಗಿ ಮೂಡಿಬರಲು, ಆಯಾ ದೇವತೆಯ ಲಕ್ಷಣ, ಸ್ವರೂಪಗಳನ್ನು ಸವಿವರವಾಗಿ ಅವುಗಳಲ್ಲಿ ನೀಡಿರುತ್ತಾರೆ. ಇಂಥ ಒಂದು ಉತ್ತಮ ವ್ಯವಸ್ಥೆಯಿರುವ ಕಾರಣದಿಂದಲೇ, ದೇವ ವಿಗ್ರಹಗಳು ವಿರೂಪವಾಗದೇ, ಶಿಲ್ಪಿಯು ತನ್ನ ವೈಯುಕ್ತಿಕ ಅಭಿಪ್ರಾಯಗಳನ್ನು ಅದರಲ್ಲಿ ಮೂಡಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಗಣಪತಿಯ ವಿಗ್ರಹಗಳು ಇತ್ತೀಚೆಗೆ ತಳೆಯುತ್ತಿರುವ ಅವತಾರಗಳ ಹಿನ್ನೆಲೆಯಲ್ಲಿ ಈ ಪುರಾತನ ಕ್ರಮವನ್ನು ಪರಿಶೀಲಿಸಿದರೆ ಅದರ ಮಹತ್ವ ಅರಿವಾಗುತ್ತದೆ.

ಭೈರವನ ಮೂಲರೂಪವಾದ ಕ್ಷೇತ್ರಪಾಲ ಭೈರವನ ಲಕ್ಷಣಗಳೊಂದಿಗೆ ಆರಂಭವಾಗುವ ಈ ಸಾಹಿತ್ಯದಲ್ಲಿ ಆತನ ಇನ್ನಿತರ ಎಂಟು ರೂಪಗಳ ವಿವರಗಳಿವೆ. ಅದೇ ರೀತಿ, ಭೈರವನ ಆರಾಧನೆಯು ಆತನ ಸ್ತ್ರೀಪಾಲುದಾರರಿಲ್ಲದೆ ಪರಿಪೂರ್ಣವಾಗದು ಎಂಬ ಹಿನ್ನೆಲೆಯಲ್ಲಿ ಗಮನಿಸಿದರೆ, ಇಲ್ಲಿ ವಾರಾಹಿ, ಚಾಮುಂಡಾದಿ ಸಪ್ತ ಮಾತೃಕೆಯರ ಶಕ್ತಿ ಸಹಿತನಾಗಿರುವಂತೆ ಭೈರವನನ್ನು ವರ್ಣಿಸಲಾಗಿದೆ. 

ಈ ಶ್ಲೋಕಗಳು ಶೈವ, ವೈಷ್ಣವ ಪಾರಮ್ಯಗಳನ್ನು ಬಿಂಬಿಸುವ ಪರಿಪಾಠವಿದ್ದ ಕಾಲಕ್ಕಿಂತ ಹಿಂದಿನದು ಅಥವಾ ಆ ನಂತರದ ಸುಧಾರಣೆಯ ದಿನಗಳ ನಂತರ ಬಂದಿರಬಹುದೆಂದು ಊಹಿಸಲು ಸಮಾನ ಅವಕಾಶಗಳಿವೆ. ಏಕೆಂದರೆ ಈ ರಚನೆಯಲ್ಲಿ ಲಕ್ಷ್ಮೀ, ಗರುಡ, ಶಂಖ, ಚಕ್ರಗಳ ಪ್ರಸ್ತಾಪವಿದೆ. ಶೈವ ಪಾರಮ್ಯವನ್ನೇ ಬಿಂಬಿಸುವ ಇನ್ನೊಂದು ಭೈರವ ಸಹಸ್ರನಾಮದ ಪಠ್ಯವಿದೆ. ಅದನ್ನು ಅನುವಾದಿಸುತ್ತಿರುವಾಗ ಮೂಡಿದ ಭಾವಗಳನ್ನು ಪ್ರತ್ಯೇಕವಾಗಿ ಇನ್ನೊಂದು ಲೇಖನದಲ್ಲಿ ಮುಂದೆ ವಿವರಿಸುತ್ತೇನೆ. 


ಕ್ಷೇತ್ರಪಾಲ ಭೈರವ

      ರಕ್ತಜ್ವಾಲಾ ಜಟಾಧರಂ ಶಶಿ ಧಾರಣ ರಕ್ತಾಂಗ ತೇಜೋಮಯಂ |
      ಢಕ್ಕಾ ಶೂಲ ಕಪಾಲ ಪಾಶ ಗದಾ ಧಾರಣಂ ಭೈರವಂ ||
      ನಿರ್ವಾಣಂ ಗತವಾಹನಂ ತ್ರಿನಯನಂ ಚ ಆನಂದ ಕೋಲಾಹಲಂ |
      ವಂದೇ ಭೂತ ಪಿಶಾಚನಾಥ ವಟುಕಂ ಕ್ಷೇತ್ರಸ್ಯ ಪಾಲಂ ಶುಭಮ್ 

1. ಅಸಿತಾಂಗ ಭೈರವ

    ತ್ರಿನೇತ್ರಂ ವರದಂ ಶಾಂತಂ ಮುಂಡಮಾಲಾ ವಿಭೂಷಿತಮ್ |
    ಶ್ವೇತವರ್ಣಂ ಕೃಪಾಮೂರ್ತಿಂ ಭೈರವಂ ಕುಂಡಲೋಜ್ವಲಂ ||
    ಗದಾ ಕಪಾಲ ಸಂಯುಕ್ತಂ ಕುಮಾರಸ್ಯ ದಿಗಂಬರಂ |
    ಬಾಣಪಾತ್ರಂ ಚ ಶಂಖಂ ಚ ಅಕ್ಷಮಾಲಾಂ ಚ ಕುಂಡಲಂ |
    ನಾಗಯಜ್ಞೋಪವೀತಂ ಚ ಧಾರಿಣಂ ಸುವಿಭೂಷಿತಂ ||
    ಬ್ರಹ್ಮಣಿ ಶಕ್ತಿಸಹಿತಂ ಹಂಸಾರೂಢಂ ಸುರೂಪಿತಮ್ |
    ಸರ್ವಾಭೀಷ್ಟದಾತಂ ನಿತ್ಯಂ ಅಸಿತಾಂಗ ಭೈರವಂ ಭಜಾಮ್ಯಹಂ ||

2. ಕ್ರೋಧ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಂ ಶಂಖಂ ಚ ಚಕ್ರಂ ಚ ಕಪಾಲ ಪಾತ್ರಂ ಚ ಧಾರಿಣಂ ||
    ಲಕ್ಷ್ಶಾ ಚ ಸಹಿತಂ ವಾಮೇ ಗರುಡಾಸನ ಸುಸ್ಥಿತಂ |
   ನೀಲವರ್ಣಂ ಮಹಾದೇವಂ ವಂದೇ ಶ್ರೀ ಕ್ರೋಧ ಭೈರವಂ ||

3. ಉನ್ಮತ್ತ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಹೇಮವರ್ಣಂ ಮಹಾದೇವಂ ಹಸ್ತಿವಾಹನ ಸುಸ್ಥಿತಮ್ ||
    ಗದಂ, ಕಪಾಲಂ, ಮುಸಲಂ ದಧಂತಂ ಖಡ್ಗಂ ತಥಾ |
    ವಾರಾಹೀ ಶಕ್ತಿ ಸಹಿತಂ ವಂದೇ ಉನ್ಮತ್ತ ಭೈರವಂ  ||

4. ರುರು (ಗುರು) ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ದಂಡಂ ಕೃಷ್ಣ ಮೃಗಂ ಪಾತ್ರಂ ಬಿಭ್ರಾಣಂ ಚಕ್ರಪಾನಕಮ್ ||
    ಮಾಹೇಶ್ವರ್ಯಾಯುಧಂ ದೇವಂ ವೃಷಾರೂಢ ಸ್ಥಿತವಾಹನಮ್ |
    ಶುದ್ಧ ಸ್ಫಟಿಕಂ ಶಂಕರಮ್ ತಂ ನಮಾಮಿ ರುರು ಭೈರವಮ್ ||

5. ಕಪಾಲ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಪಾಶಂ, ವಜ್ರಂ  ತಥಾ ಗದಾ ಪಾನ ಪಾತ್ರಂ ಚ ಧಾರಿಣಮ್ ||
    ಇಂದ್ರಾಣೀ ಶಕ್ತಿ ಸಹಿತಂ ಗಜವಾಹನ ಸಂಸ್ಥಿತಂ |
    ಕಪಾಲ ಭೈರವಂ ವಂದೇ ಪದ್ಮರಾಗ ಪ್ರಭಾಂ ಶುಭಮ್ ||

6. ಚಂಡ ಭೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಧನುರ್ಬಾಣಂ ಚ ಬಿಭ್ರಾಣಂ ಗದಾ ಪಾತ್ರಂ ತಥೈವ ಚ ||
    ಕೌಮಾರೀ ಶಕ್ತಿ ಸಹಿತಂ ಶಿಖಿ ವಾಹನ ಸುಸ್ಥಿತಮ್ ||
    ಗೌರೀವರ್ಣಾಯುಧಂ ದೇವಂ ವಂದೇ ಶ್ರೀ ಚಂಡ ಭೈರವಮ್ ||

7. ಭೀಷಣ ಬೈರವ

    ತ್ರಿನೇತ್ರಂ ವರದಂ ಶಾಂತಂ, ಕುಮಾರಂ ಚ ದಿಗಂಬರಂ |
    ಗದಾ ಶೂಲಂ ಕಪಾಲಂ ಚ ಧಾರಿಣಂ ಮುಸಲಮ್ ತಥಾ ||
    ಚಾಮುಂಡಾ ಶಕ್ತಿ ಸಹಿತಂ ಪ್ರೇತವಾಹನ ಸಂಸ್ಥಿತಮ್ ||
    ರಕ್ತವರ್ಣಂ ಮಹಾದೇವಂ ವಂದೇ ಭೀಷಣ ಭೈರವಮ್ ||

8. ಸಂಹಾರ ಭೈರವ

    ದಶಬಾಹುಂ ತ್ರಿನೇತ್ರಂ ಚ ಸರ್ಪಯಜ್ಞೋಪವೀತಿನಂ |
    ದಂಷ್ಟ್ರ ಕರಾಳವದನಂ ಅಷ್ಟೈಶ್ವರ್ಯ ಪ್ರದಾಯಕಮ್ || 
    ದಿಗಂಬರಂ ಕುಮಾರಂ ಚ ಸಿಂಹವಾಹನ ಸಂಸ್ಥಿತಮ್ |
    ಶೂಲಂ ಡಮರುಗಂ ಶಂಖಂ ಗದಾ ಚಕ್ರಾಂ ಚ ಧಾರಿಣಮ್ ||
    ಪಾನ ಪಾತ್ರಂ ಚ ಖಟ್ವಾಂಗಂ ಪಾಶಮಂಕುಶಮೇವ  ಚ |
    ಉಗ್ರರೂಪಂ ಮದೋನ್ಮತ್ತಂ ಶಿರೋಮಾಲಾ ವಿಭೂಷಿತಮ್ ||
    ಚಂಡಿಕಾ ಶಕ್ತಿ ಸಹಿತಂ ಧ್ಯಾಯೇತ್ ಸಂಹಾರ ಭೈರವಮ್ ||

* * * * * * *


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ