ಭಾನುವಾರ, ನವೆಂಬರ್ 27, 2011

"ಭೈರವ ದೇವರ ಅವತರಣ"


ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ "ಭೈರವ ದೇವರ ಅವತರಣ". ಈ ವಿಷಯದ ಬಗ್ಗೆ ಅನೇಕ ಕಥಾನಕಗಳು ಪ್ರಚಲಿತವಿದೆಯಾದರೂ, ಇಲ್ಲಿರುವ ಬರಹವನ್ನು ವಾರಾಣಸಿಯ ದೇಹಾತ್ ಪ್ರಕಾಶನ ಸಂಸ್ಥೆಯವರು ಪ್ರಕಟಿಸಿರುವ "ಭೈರವ ಪೂಜಾ ವಿಧಾನ" ಗ್ರಂಥದಿಂದ ಆಯ್ದುಕೊಳ್ಳಲಾಗಿದೆ. ಇತರ ಕಥಾನಕಗಳಲ್ಲೂ ಹೆಚ್ಚು ಕಡಿಮೆ ಇದೇ ಅಂಶಗಳು ಪ್ರಸ್ತಾಪಿತವಾಗಿದ್ದು, ಅಲ್ಲಲ್ಲಿ ಅಲ್ಪ ಸ್ಪಲ್ಪ ಬದಲಾವಣೆಗಳು ಕಂಡುಬರುತ್ತವೆ. ಏನಿದ್ದರೂ ಪುರಾಣ ಕಥಾನಕಗಳು ಜನರ ಬಾಯಿಂದ ಬಾಯಿಗೆ ಹರಿದು ಬರುವಾಗ ಇಂತಹ ವ್ಯತ್ಯಾಸಗಳು ಸ್ವಾಭಾವಿಕ. ನಮ್ಮ ಅನೇಕ ಶಿಲ್ಪಗಳಲ್ಲಿ, ಚಿತ್ರಗಳಲ್ಲಿ  ಬ್ರಹ್ಮನು ಚತುರ್ಮುಖನಾಗಿಯೇ ಚಿತ್ರಿತನಾಗಿರುವನಷ್ಟೇ. ಆದರೆ ವಸ್ತುಸ್ಥಿತಿ ಹಾಗಿಲ್ಲ.  ತಾನೇ ಅತಿ ಶ್ರೇಷ್ಠನೆಂದು ಬ್ರಹ್ಮನಂಥ ಪಿತಾಮಹನೇ ಗಳಹಲು ಆರಂಭಿಸಿದಾಗ,ಪಂಚಮುಖನಾದ ಆತನು ಅನಿವಾರ್ಯವಾಗಿ ತನ್ನ ಒಂದು ಶಿರವನ್ನು ಕಳೆದುಕೊಂಡು ಚತುರ್ಮುಖ ಬ್ರಹ್ಮನಾದನು. ಈ ಕಾರಣದಿಂದ ಕಾಲಭೈರವನ ಉತ್ಪತ್ತಿಯೂ ಆಯಿತು. ಇದರಲ್ಲಿ ಅಹಂಕಾರವು ಯಾರಿಗೂ ಸಲ್ಲದೆಂಬ ಒಂದು ನೀತಿಯೂ ಇದೆ. ವಿಸ್ತೃತ ಬರಹ ನಿಮ್ಮ ಮುಂದಿದೆ. ಓದಿ.







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ